ಬೆಸೆಯುವಂತೆ
ಬಯಲಲೊಂದು
ಒಂಟಿ ಮರ.
ಟಿಸಿಲೊಡೆದ ಒಣ ರೆಂಬೆಗಳು
ಮೋಡದೊಳಗೇ ಇಳಿದು
ನೀರ ಹೀರುತಿವೆಯೆನೋ
ಭೂಮಿ ಭರಡಾದರೆ
ಇನ್ನೇನು ಮಾಡೀತು ಪಾಪ! !
ನೆಲದೊಳಗಿನ ಬೇರು
ಗತಕಾಲವನ್ನೆಲ್ಲಾ
ತಡವಿ, ಎಡವಿ
ಒಳಗಿನ ಲವಾರಸಕ್ಕೆ
ಕರಟಿ ಹೋಗಿದೆ
ನೀರ ಅರಸುವ ಭರದಲ್ಲಿ,
ಮಣ್ಣ ಹೆಂಟೆಯ ಒಳಗಿನ
ಬೆಂಕಿಯ ಭಯದಲ್ಲಿ,
ಬೇರ ಮರೆತೇ ಬಿಟ್ಟಿದೆ.
ಜನರೂ ಅಷ್ಟೇ
ಅದ ಕಂಡಾಗೆಲ್ಲಾ
ಶೀರ್ಷಾಸನ ಹಾಕಿ
ಆ ಮರದಂತೆ ನಾವೂ
ಭೂಮಿಯನ್ನು
ಹಿಡಿದಿಟ್ಟಿದ್ದೇವೆ
ಅನ್ನುತ್ತಾರೆ.