Saturday, August 16, 2008

ಊರ್ಧ್ವಮುಖಿ

ಭುವಿಯನ್ನೂ ಬಾನನ್ನೂ
ಬೆಸೆಯುವಂತೆ
ಬಯಲಲೊಂದು
ಒಂಟಿ ಮರ.

ಟಿಸಿಲೊಡೆದ ಒಣ ರೆಂಬೆಗಳು
ಮೋಡದೊಳಗೇ ಇಳಿದು
ನೀರ ಹೀರುತಿವೆಯೆನೋ
ಭೂಮಿ ಭರಡಾದರೆ
ಇನ್ನೇನು ಮಾಡೀತು ಪಾಪ! !

ನೆಲದೊಳಗಿನ ಬೇರು
ಗತಕಾಲವನ್ನೆಲ್ಲಾ
ತಡವಿ, ಎಡವಿ
ಒಳಗಿನ ಲವಾರಸಕ್ಕೆ
ಕರಟಿ ಹೋಗಿದೆ

ನೀರ ಅರಸುವ ಭರದಲ್ಲಿ,
ಮಣ್ಣ ಹೆಂಟೆಯ ಒಳಗಿನ
ಬೆಂಕಿಯ ಭಯದಲ್ಲಿ,
ಬೇರ ಮರೆತೇ ಬಿಟ್ಟಿದೆ.

ಜನರೂ ಅಷ್ಟೇ
ಅದ ಕಂಡಾಗೆಲ್ಲಾ
ಶೀರ್ಷಾಸನ ಹಾಕಿ
ಆ ಮರದಂತೆ ನಾವೂ
ಭೂಮಿಯನ್ನು
ಹಿಡಿದಿಟ್ಟಿದ್ದೇವೆ
ಅನ್ನುತ್ತಾರೆ.

No comments: