Saturday, October 4, 2008

ಸಂಕೋಲೆ



ಭಾವನೆಗಳ ಗರಿಗೆದರಿ

ಮುಕ್ತತೆಯ ಮತ್ತೇರಿ

ಕನಸಿನ ಬೆನ್ನೇರಿ

ಹಾರಲು ಸಿದ್ದ


ಮತ್ತೇನೋ ಸೆಳೆತ

ನೆನಪಿನ ಬೇರು

ಭೂಮಿಗೆ ಬಂದಿತ

ಕರ್ತವ್ಯಕೆ ಅಂಜುವೆಯೇಕೆ?


ಏಕಾಂತವು ತೇಲುವ ಮೇಘ

ದು:ಖವು ಕರಗುವ ಆವಿ

ಮಿಂಚಿ ಗುಡುಗುವ ಬುದ್ದಿ

ಕಣ್ಣೀರ ಹನಿಮಳೆ

ಕಡಲ ಸೇರುವ ದಿನವೆಂದೋ?!


ಸ್ವಾತಂತ್ರ್ಯ ಮಾರುತದಿ

ತೇಲುವ ಮನ, ತಡೆ ಅರೆ ಕ್ಷಣ

ಮಣ್ಣಿನ ವಾಸನೆಯ ಮರೆಯುವುದೆಂತು?


ಪ್ರೀತಿ, ವಾತ್ಸಲ್ಯ,ಬಾಂದವ್ಯ,ಜವಾಬ್ದಾರಿ, ವಿಶ್ವಾಸ

ಬಾವನೆಗಳೇ ಕೊಂಡಿಗಳು

ಹುಚ್ಚು ಮನಸ್ಸಿಗೆ ತೊಡರುವ ಸಂಕೋಲೆಗೆ.

No comments: