ಭುವಿಯು ರೆಪ್ಪೆ ಮುಚ್ಚಿದ ವೇಳೆ
ಬೆಳಕು ಬತ್ತಲಾಗಿ
ಕತ್ತಲಾಗಿದೆ ನೋಡು
ಬದುಕು ಬಳುಕುವ ವೇಳೆ
ಉಸಿರ ತುಡಿತಕ್ಕೊಂದು
ಪದವ ಹಿಡಿದು
ನಿನ್ನೆ-ನಾಳೆಗಳ ಜೊತೆಗೆ ಹೆಣೆದು
ಇಂದಿಗೊಂದಿಷ್ಟು ಇಂಬುಕೊಟ್ಟು
ವರ್ತಮಾನದ ಸಾಲು ಬರೆದು
ಗಡಿಯಾರದ ಮುಳ್ಳು ಕಿತ್ತು
ಸಮಯದಲದ್ದಿ, ಬದುಕಿಗೊಂದು
ಭಾಷ್ಯ ಬರೆದಿರಲು
ಮಬ್ಭುಗತ್ತಲ ಬಾಳ ಮೇಲೆ
ಬೆಳಕಿನಿಂದಲೇ ಒಂದು
ಕವಿತೆ ಮುಡಿತು ನೋಡು.
5 comments:
ಚೆಂದದ ಕವಿತೆ
Hi ಮಹೇಶ್ ರವರೆ,
ಒಳ್ಳೆಯ ಮಳೆ ! ಚೆ೦ದದ ಕವನ. 'niharika' ಏಕೋ ಖಾಲಿ ಖಾಲಿಯಾಗಿದೆ! ಬೇಗ ತು೦ಬಿಸಿ...
~ಸುಷ್ಮ ಸಿ೦ಧು
@ malehani
thanks..
@ sushmasindhu..
thanks..
ತಡವಾಗಿ blog update ಮಾಡಿದ್ಡಕ್ಕೆ ಕ್ಷಮೆ ಇರಲಿ ..
ಮಾಚಾ ಇನ್ನು ಬದಲಾಗಿಲ್ಲ ಮಾರೆ.. ನನಗೆ ನಿನ್ನ ಕವಿತೆಗಳು ಮೊದಲಿನಿಂದಲೆ ಅರ್ಥ ಮಾಡಿಕೊಳ್ಳಲು ಕಷ್ಟವಾಗ್ತಾ ಇತ್ತು ಈಗ್ಲೂ ಹಾಗೆ :D ಹೀಗೆ ಮುಂದುವರಿಸು
ಗಡಿಯಾರದ ಮುಳ್ಳು ಕಿತ್ತು
ಸಮಯದಲದ್ದಿ, ಬದುಕಿಗೊಂದು
ಭಾಷ್ಯ ಬರೆದಿರಲು
WOW!!! really enticed by the line.
Post a Comment