Wednesday, February 11, 2009

ಗೋಧೂಳಿ

ಮೊಳಗಿದೆ ಚೆಂಡೆ ನಾದ
ಚಿಮ್ಮಿದೆ ಕಾರಂಜಿ.
ಗದ್ದೆಯ ಕೆಸರು ನೀರ
ಕೆಂಬಣ್ಣ ಹೊಳೆಯುತ್ತಿದೆ
ಹೊಸತಾಗಿ,ಹಸನಾಗಿ..

ನೊಗವನೆತ್ತಿ ನಗುವಾಗ
ಬಯಲಲ್ಲಿ ಉಳುವಾಗ
ಪುಣ್ಯಕೋಟಿ ಲವಕುಶರು
ಚೆಂಡೆಯ ಸದ್ದಿಗೇಕೋ
ಬೆದರುತ್ತಾರೆ,
ಓಡುತ್ತಾರೆ ಕೈ ತಪ್ಪಿಸಿ
ಅತ್ತಿತ್ತ ತಿರುಗದೆ
ನೆರವಾಗಿ.
ನನಗೂ ಆವೇಶ,
ಹಿಂದೆಯೇ ನುಗ್ಗುತ್ತೇನೆ
ಕೈಯೆತ್ತಿ..

ಜಾರಿಹೋಗಿದೆ ನೊಗವು
ಬರಡಾಗಿದೆ ಹೊಲವು
ಒಣ ನೆಲದ ಮೇಲೆ
ಬ್ರಹ್ಮಾಂಡದಗಲ
ಗೊರಸ ಗುರುತು.
ಇನ್ನು ಹಿಂತಿರುಗಲೇ ಬೇಕು
ಗೋಧೂಳಿಯ
ಹಣೆಗೆ ಹಚ್ಚಿ.

(ಸೌಂದರ್ಯ ಮತ್ತು ಸತ್ಯ" ಕಂಬಳದ ಬಗೆಗಿನ ಟೆಲಿ ಫಿಲ್ಮ್ ನೋಡಿದಾಗ ಮೋಡಿದ್ದು.)