
ಭಾವನೆಗಳ ಗರಿಗೆದರಿ
ಮುಕ್ತತೆಯ ಮತ್ತೇರಿ
ಕನಸಿನ ಬೆನ್ನೇರಿ
ಹಾರಲು ಸಿದ್ದ
ಮತ್ತೇನೋ ಸೆಳೆತ
ನೆನಪಿನ ಬೇರು
ಭೂಮಿಗೆ ಬಂದಿತ
ಕರ್ತವ್ಯಕೆ ಅಂಜುವೆಯೇಕೆ?
ಏಕಾಂತವು ತೇಲುವ ಮೇಘ
ದು:ಖವು ಕರಗುವ ಆವಿ
ಮಿಂಚಿ ಗುಡುಗುವ ಬುದ್ದಿ
ಕಣ್ಣೀರ ಹನಿಮಳೆ
ಕಡಲ ಸೇರುವ ದಿನವೆಂದೋ?!
ಸ್ವಾತಂತ್ರ್ಯ ಮಾರುತದಿ
ತೇಲುವ ಮನ, ತಡೆ ಅರೆ ಕ್ಷಣ
ಮಣ್ಣಿನ ವಾಸನೆಯ ಮರೆಯುವುದೆಂತು?
ಪ್ರೀತಿ, ವಾತ್ಸಲ್ಯ,ಬಾಂದವ್ಯ,ಜವಾಬ್ದಾರಿ, ವಿಶ್ವಾಸ
ಬಾವನೆಗಳೇ ಕೊಂಡಿಗಳು
ಹುಚ್ಚು ಮನಸ್ಸಿಗೆ ತೊಡರುವ ಸಂಕೋಲೆಗೆ.
No comments:
Post a Comment